ಅಪ್ಪು ಹೊಸ ಲುಕ್ ಒಮ್ಮೆ ವಿಡಿಯೋ ನೋಡಿ

 

ಪುನೀತ್ ರಾಜ್ ಕುಮಾರ್ ನಮ್ಮೊಂದಿಗೆ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ನಿತ್ಯ ಪುನೀತ್ ಅವರ ಬಗ್ಗೆ ಹಲವು ವಿಚಾರಗಳನ್ನು ತಿಳಿದುಕೊಳ್ಳಲು ಜನ ಕಾತುರರಾಗಿದ್ದಾರೆ. ಹೌದು ಪುನೀತ್ ಇಲ್ಲ ಎಂಬ ಸತ್ಯ ಗೊತ್ತಿದ್ದರೂ ಇದೊಂದು ಕನಸಾಗಿ ಬಿಡಲಿ. ಅಪ್ಪು ಜೀವಂತವಾಗಿ ವಾಪಸ್ ಬರಲಿ ಅನ್ನೋ ಆಸೆ ಎಲ್ಲರಲ್ಲೂ ಯಾವುದೋ ಒಂದು ಮೂಲೆಯಲ್ಲಿ ಹಾಗೆ ಉಳಿದಿದೆ. ಹೌದು ದುರಾದೃಷ್ಟವಶಾತ್ ಪುನೀತ್ ರಾಜ್ ಕುಮಾರ್ ಅವರು ಮತ್ತೆಂದೂ ಮರಳಿ ಬಾರದ ಲೋಕಕ್ಕೆ ಹೋಗಿರುವುದು ಸತ್ಯ.

ಇನ್ನು ಪುನೀತ್ ರಾಜಕುಮಾರ್ ರವರು ಇದ್ದಾಗ ಅವರು ಮಾಡಿದ ಸೇವೆಗಳು ಅವರು ಮಾಡಿದ ಸಹಾಯ ಹಾಗೂ ಅವರು ಬದುಕಿದ ರೀತಿ ಪ್ರತಿಯೊಬ್ಬರಲ್ಲೂ ಅಚ್ಚರಿಯನ್ನು ಮೂಡಿಸಿದೆ. ಒಬ್ಬ ಮನುಷ್ಯ ಇಷ್ಟು ಸರಳವಾಗಿ ಬದುಕಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದ್ದು ಕಷ್ಟದಲ್ಲಿದ್ದವರಿಗೆ ಕೈಚಾಚುತ್ತಾ ಅಗತ್ಯವಿದ್ದವರಿಗೆ ಸಹಾಯ ಮಾಡುತ್ತಾ ಸರಳ ಜೀವನ ನಡೆಸಿದ ಪುನೀತ್ ರಾಜ್ ಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ. ದೊಡ್ಮನೆ ಹುಡುಗ ದೊಡ್ಮನೆ ಅವರಂತೆಯೇ ದೊಡ್ಡ ಮನಸ್ಸಿನಿಂದ ಬದುಕಿದವರು.

ಅವರು ಇದ್ದಾಗ ಅವರು ಮಾಡುತ್ತಿದ್ದ ಸಹಾಯಗಳು ಯಾರಿಗೂ ತಿಳಿಯದಂತೆ ನೋಡಿಕೊಂಡಿದ್ದರು. ಹೌದು ಆದರೆ ಅವರು ಕೊನೆಯುಸಿರೆಳೆದ ಕ್ಷಣದಿಂದ ಇಂದಿನವರೆಗೂ ಅವರಿಂದ ಸಹಾಯ ಪಡೆದ ಪ್ರತಿಯೊಬ್ಬ ಮನುಷ್ಯನು ಬಂದು ಮಾಧ್ಯಮಗಳ ಮುಂದೆ ನಮಗೆ ಅಷ್ಟು ಸಹಾಯ ಮಾಡಿದರು ಇಷ್ಟು ಮಾಡಿದ್ದರು. ಇನ್ನು ಮುಂದೆ ಯಾರೂ ನಮಗೆ ಎಂದೆಲ್ಲಾ ಮಾತನಾಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಕರುನಾಡಿನ ಮಗನಾಗಿದ್ದು ಕರ್ನಾಟಕದ ಪ್ರತಿಯೊಂದು ಮನೆಗಳಲ್ಲೂ ಪುನೀತ್ ರಾಜ್ ಕುಮಾರ್ ಅವರನ್ನು ನೆನೆಯದ ದಿನಗಳಿಲ್ಲ. ಹೌದು ಅಂತಹ ವ್ಯಕ್ತಿ ನಮ್ಮನ್ನು ಇಷ್ಟು ಬೇಗ ಬಿಟ್ಟು ಹೋದರಲ್ಲ ಎಂಬದು ಎಲ್ಲರನ್ನೂ ಕಾಡುತ್ತಿದೆ.